BBK 10: "ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ": ಪ್ರತಾಪ್‌ಗೆ ವಿನಯ್‌ ಅವಾಜ್‌!

Bigg Boss Kannada 10: ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಬಾರಿ ಅಡುಗೆ ವಿಚಾರವಾಗಿ ಜಗಳ ನಡೆದಿದ್ದು, ಈ ಬಾರಿ ದಿನಸಿ ವಿಚಾರವಾಗಿ ಕೋಪಗೊಂಡ ವಿನಯ್‌ ಪ್ರತಾಪ್‌ಗೆ ‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’ ಎಂದು ಅವಾಜ್ ಹಾಕಿದ್ದಾರೆ.  

Written by - Zee Kannada News Desk | Last Updated : Dec 19, 2023, 10:56 AM IST
  • ಬಿಗ್‌ಬಾಸ್‌ ಮನೆಯಲ್ಲಿ ಹಲವಾರು ಬಾರಿ ಅಡುಗೆ ವಿಚಾರಕ್ಕೆ ಜಗಳಗಳು ಉಂಟಾಗುತ್ತಿದೆ.
  • ಸ್ಪರ್ಧಿಗಳಿಗೆ ದಿನಸಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಈ ಆಯ್ಕೆಗೆ ನಾಲ್ಕು ಸ್ಪರ್ಧಿಗಳ ಅವಶ್ಯಕತೆ ಇತ್ತು.
  • ಕೋಪಗೊಂಡ ವಿನಯ್‌, ‘ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ.’ ಎಂದು ಎಚ್ಚರಿಕೆ ನೀಡಿದಾಗ, ಪ್ರತಾಪ್ ಸೈಲೆಂಟ್ ಆದರು.
BBK 10: "ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ": ಪ್ರತಾಪ್‌ಗೆ ವಿನಯ್‌ ಅವಾಜ್‌! title=

Drone Prathap Vs Vinay: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಮನೆಯಲ್ಲಿ ಹಲವಾರು ಬಾರಿ ಅಡುಗೆ ವಿಚಾರಕ್ಕೆ  ಜಗಳಗಳು ಉಂಟಾಗುತ್ತಿದ್ದು, ಯಾರು ಯಾರ ವಿರುದ್ಧ ಸಿಡಿದೇಳುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಈಗ ಬಿಗ್‌ಬಾಸ್‌ ಮನೆಯ ದಿನಸಿ ವಸ್ತುಗಳ ವಿಚಾರಕ್ಕೆ ಸಂಬಂಧಿಸಿ ಜಗಳ ಮತ್ತೆ ಭುಗಿಲೆದ್ದಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಆಗುತಿದ್ದು, ಇಡೀ ಮನೆ ಹೊತ್ತಿ ಉರಿದಿದೆ.

ದೊಡ್ಮನೆಯಲ್ಲಿ ಬಿಗ್‌ಬಾಸ್ ಹೆಚ್ಚು ದಿನಸಿ ನೀಡುವುದಿಲ್ಲ ಎನ್ನುವ ಆರೋಪವನ್ನು ಸ್ಪರ್ಧಿಗಳು ಮಾಡುತ್ತಲೇ ಬಂದಿದ್ದು, ಈ ಕಾರಣದಿಂದ ಬಿಗ್‌ಬಾಸ್ ಹೊಸ ಆಯ್ಕೆ ನೀಡಿದ್ದರು. ಸ್ಪರ್ಧಿಗಳಿಗೆ ದಿನಸಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಈ ಆಯ್ಕೆಗೆ ನಾಲ್ಕು ಸ್ಪರ್ಧಿಗಳ ಅವಶ್ಯಕತೆ ಇತ್ತು. ಹಾಗಾಗಿ ಕಾರ್ತಿಕ್, ತನಿಷಾ, ಸಂಗೀತಾ ಹಾಗೂ ಮೈಕಲ್ ಕೆಲವು ವಸ್ತುಗಳನ್ನು ಆಯ್ಕೆ ಮಾಡಲು ಹೋದರು.

ಇದನ್ನೂ ಓದಿ: ಬಿಗ್‌ಬಾಸ್‌ ವಿನಯ್ ಬೆಂಬಲಕ್ಕೆ ನಿಂತ ಕಿರುತೆರೆ ನಟಿ: ಅನು ಪೂವಮ್ಮಗೆ ನೆಗೆಟಿವ್‌ ಕಮೆಂಟ್ಸ್‌!

ಆಗ ಅಕ್ಕಿಯ ತೂಕವನ್ನು ಕೇವಲ 5 ಕೆಜಿ ಆಯ್ಕೆ ಮಾಡಿ, ಉಪ್ಪು ಇದೆ ಎಂದರೂ ಅದನ್ನು ಆಯ್ದುಕೊಂಡರು. ಈ ಎಲ್ಲಾ ಕಾರಣದಿಂದ ಉಳಿದ ಸ್ಪರ್ಧಿಗಳು ಸಿಟ್ಟಾದರು. ಮನೆಯ ಸೋಫಾ ಮೇಲೆ ಕುಳಿತಿದ್ದ ವಿನಯ್  ಬೈದುಕೊಳ್ಳುತ್ತಿರುವಾಗ,  ಆ ವೇಳೆ ಪ್ರತಾಪ್, ‘ಸಂಗೀತಾ ಅವರ ತಪ್ಪಿಲ್ಲ. ಅಲ್ಲಿ ಹೋದ ಎಲ್ಲಾ ಸ್ಪರ್ಧಿಗಳ ತಪ್ಪು’ ಎಂಬರ್ಥದಲ್ಲಿ ಮಾತನಾಡಿದರು. ಆಗ ವಿನಯ್ ಸಿಟ್ಟಾದರು.

ಕೋಪಗೊಂಡ ವಿನಯ್‌, ‘ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ. ನಾನು ನಿನ್ನ ಸಂಗೀತಾ ಅವರ ತಪ್ಪು ಎಂದು ಹೇಳಿಲ್ಲ. ಎಲ್ಲರ ತಪ್ಪು ಎಂದಿದ್ದೇನೆ. ನೀನು ಯಾವ ಅರ್ಥದಲ್ಲಿ ಮಾತನಾಡುತ್ತಿದ್ದೀಯಾ ಅನ್ನೋದು ಗೊತ್ತಾಗುತ್ತದೆ. ಸಂಗೀತಾನ ವಹಿಸಿಕೊಂಡು ಮಾತನಾಡುವ ಬದಲು ಮನೆಯ ಬಗ್ಗೆ ನೋಡು’ ಎಂದು ಎಚ್ಚರಿಕೆ ನೀಡಿದಾಗ, ಪ್ರತಾಪ್ ಸೈಲೆಂಟ್ ಆದರು. ವಿನಯ್ ಸದಾ ಅಗ್ರೆಷನ್ ತೋರಿಸುತ್ತಿರುವುದರಿಂದ, ಈ ರೀತಿಯ ಅಗ್ರೆಷನ್ ಸರಿ ಅಲ್ಲ ಅನ್ನೋದು ಅನೇಕರ ಅಭಿಪ್ರಾಯ ತಿಳಿಸಿದರು, ಅದನ್ನೇ ಮುಂದುವರಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News