R Chandru: ʻಕಬ್ಜʼ ನಂತರ ಮತ್ತೆ ಸೆಂಚುರಿ ಸ್ಟಾರ್‌ಗೆ ಸ್ಟಾರ್‌ ಡೈರೆಕ್ಟರ್‌ನಿಂದ ಆಕ್ಷನ್ ಕಟ್!

R Chandru 6th Movie: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಆರ್.‌ಚಂದ್ರು ತಮ್ಮ ಆರನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಡೈರೆಕ್ಟರ್‌ ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ಜೊತೆಗೆ ಮೂರನೇ ಬಾರಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಹಾಗಿದ್ರೆ ಇದು ಯಾವ ಸಿನಿಮಾ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ.  

Last Updated : Apr 4, 2024, 12:37 PM IST
  • ಡೈರೆಕ್ಟರ್‌ ಆರ್.‌ಚಂದ್ರು ಕನ್ನಡದ ಟಾಪ್‌ ನಟರ ಜೊತೆಗೆ ಚಿತ್ರಗಳನ್ನು ಮಾಡಲಿ ಪ್ಲಾನ್‌ ಮಾಡಿದ್ದು, ಆ ಸಂಸ್ಥೆಯಿಂದ ಐದು ಸಿನಿಮಾಗಳನ್ನು ಕೂಡ ಘೋಷಣೆ ಮಾಡಿದ್ದರು.
  • ಆರ್.‌ಚಂದ್ರು ತಮ್ಮ ಆರನೇ ಸಿನಿಮಾವನ್ನು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಜೊತೆಗೆ ಮಾಡಲಿದ್ದಾರೆ.
  • ನಟ ಶಿವರಾಜ್‌ಕುಮಾರ್‌ ಹಾಗೂ ಡೈರೆಕ್ಟರ್ ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಈ ಹಿಂದೆ ತೆರೆಕಂಡ ಮೈಲಾರಿ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು.
R Chandru: ʻಕಬ್ಜʼ ನಂತರ ಮತ್ತೆ ಸೆಂಚುರಿ ಸ್ಟಾರ್‌ಗೆ ಸ್ಟಾರ್‌ ಡೈರೆಕ್ಟರ್‌ನಿಂದ ಆಕ್ಷನ್ ಕಟ್! title=

Director R Chandru and Shivarajkumar New Movie: ಸ್ಯಾಂಡಲ್‌ವುಡ್‌ನ ಹೆಸರಾಂತ ಡೈರೆಕ್ಟರ್‌ ಆರ್.‌ಚಂದ್ರು ಹಲವು ತಿಂಗಳ ಹಿಂದೆ ಆರ್‌.ಸಿ. ಸ್ಟುಡಿಯೋಸ್ ಅನ್ನೋ ಒಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ದೊಡ್ಡ ಮಟ್ಟದಲ್ಲೇ ಲಾಂಚ್‌ ಮಾಡಿದ್ದರು. ಈ ನಿರ್ದೇಶಕ ಕನ್ನಡದ ಟಾಪ್‌ ನಟನರ ಜೊತೆಗೆ ಚಿತ್ರಗಳನ್ನು ಮಾಡಲಿ ಪ್ಲಾನ್‌ ಮಾಡಿದ್ದು, ಆ ಸಂಸ್ಥೆಯಿಂದ ಐದು  ಸಿನಿಮಾಗಳನ್ನು ಕೂಡ ಘೋಷಣೆ ಮಾಡಿದ್ದರು. 

ಇದೀಗ ನಿರ್ದೇಶಕ ಆರ್‌. ಚಂದ್ರು ಅದೇ ಸಂಸ್ಥೆಯಿಂದ ತಮ್ಮ ಆರನೇ ಚಿತ್ರವನ್ನ ಅನೌನ್ಸ್‌ ಮಾಡಿದ್ದಾರೆ. ಈ ಸ್ಟಾರ್‌ ಡೈರೆಕ್ಟರ್‌ ತಮ್ಮ ಆರನೇ ಸಿನಿಮಾವನ್ನು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಜೊತೆಗೆ ಮಾಡಲಿದ್ದಾರೆ. ಈ ವಿಷಯವನ್ನು ನಿರ್ದೇಶಕ ಆರ್.‌ ಚಂದ್ರು ಪೋಸ್ಟರ್‌ ರಿಲೀಸ್‌ ಮಾಡುವುದರ ಮುಖಾಂತರ ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ಇದೇ ಏಪ್ರಿಲ್‌ 1 ರಂದು ರಿವೀಲ್‌ ಮಾಡಿದ್ದು, ಅಂದು ಮೈಲಾರಿ ಚಿತ್ರಕ್ಕೆ 14 ವರ್ಷ ಪೂರ್ಣಗೊಳಿಸಿದೆ.

 
 
 
 

 
 
 
 
 
 
 
 
 
 
 

A post shared by R.Chandru (@rchandrumovies)

ಇದನ್ನೂ ಓದಿ: ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್ ಫೋಟೋ ಲೀಕ್ !

ನಟ ಶಿವರಾಜ್‌ಕುಮಾರ್‌ ಹಾಗೂ ಡೈರೆಕ್ಟರ್ ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಈ ಹಿಂದೆ ತೆರೆಕಂಡ ಮೈಲಾರಿ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಇದೇ ನಿರ್ದೇಶಕ ಆಕ್ಷನ್‌ ಕಟ್‌ ಹೇಳಿರುವ ಕಬ್ಜ ಚಿತ್ರ ಕಳೆದ ವರ್ಷ ತೆರೆಕಂಡಿದ್ದು, ಅದರಲ್ಲಿ ಶಿವಣ್ಣ ವಿಶೇಷ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹ್ಯಾಟ್ರಿಕ್‌ ಹೀರೋಗೆ ಈ ಡೈರೆಕ್ಟರ್‌ ಕಥೆ ಹೇಳಿದ್ದು, ಅದಕ್ಕೆ ಶಿವರಾಜ್‌ಕುಮಾರ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಸದ್ಯ ಡೈರೆಕ್ಟರ್ ಆರ್.ಚಂದ್ರು ಆರನೇ ಸಿನಿಮಾ ಘೋಷಣೆ ಮಾಡಿರುವ ಖುಷಿಯಲ್ಲಿದ್ದಾರೆ. ಈ ನಿರ್ದೇಶಕ ಚಿತ್ರದ ಬಗ್ಗೆ ಎಲ್ಲಾ ಪ್ಲಾನ್ ಮಾಡಿದ್ದು, ಬರುವ ಲೋಕಸಭಾ ಚುನಾವಣೆ ಮುಗಿದ ಬಳಿಕ ಸಿನಿಮಾ ಸೆಟ್ಟಿಗೇರಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಚಿತ್ರದ ಶೀರ್ಷಿಕೆ ಏನು? ಇದರಲ್ಲಿ ಯಾರೆಲ್ಲಾ ಬಣ ಹಚ್ಚಲಿದ್ದಾರೆ? ಎಂಬ ಮಾಹಿತಿ ಸದ್ಯಕ್ಕೆ ಹೊರ ಹಾಕಿಲ್ಲ. ನಿರ್ದೇಶಕ ಚಂದ್ರು ಈ ಸಿನಿಮಾದ ಮೂಲಕ ಮತ್ತೊಂದು ಹಿಟ್ ಕೊಡುವ ಕನಸು  ಇಟ್ಟುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News