Seetha Rama: ಬಡ್ಡಿ ಬಂಗಾರಮ್ಮಳಾದ ಸಿಹಿ: ಸೀತಾ ಮನೆಗೆ ಬಂದ ಭಾರ್ಗವಿ ಶಾಕ್‌ ಆಗಿದ್ದೇಕೆ?

Seetha Rama Serial: ಸೀತಾರಾಮ ಧಾರವಾಹಿಯಲ್ಲಿ ಸ್ಕಿಟ್‌ ಮಾಡಲೆಂದು ಸಿಹಿ ಬಡ್ಡಿ ಬಂಗಾರಮ್ಮ ಅವರಾದಲ್ಲಿ ರೆಡಿಯಾಗಿರುತ್ತಾಳೆ. ಆದೇ ಸಂದರ್ಭದಲ್ಲಿ ಸೀತಾ ಮನೆಗೆ ಭಾರ್ಗವಿಯ ಆಗಮನವಾಗುತ್ತದೆ. ಹಾಗಿದ್ರೇ ಭಾರ್ಗವಿ ಸೀತಾ ಮನೆಗೆ ಬಂದಿದ್ಯಾಕೆ? ನಂತೆ ಈಕೆ ಶಾಕ್‌ ಆಗಿದ್ದೇಕೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Apr 3, 2024, 05:02 PM IST
  • ಸಿಹಿ ಹಸಿರು ಸೀರೆಯನ್ನು ಉಟ್ಟಿಕೊಂಡು ಕಣ್ಣಗೆ ದೊಡ್ಡ ಕನ್ನಡಕವನ್ನು ಹಾಕಿಕೊಂಡಿರುತ್ತಾಳೆ.
  • ಸ್ಕಿಟ್‌ ನಡೆಯುವ ಸಂದರ್ಭದಲ್ಲಿ ಶಾಂತಮ್ಮನ ವಠಾರಕ್ಕೆ ಭಾರ್ಗವಿಯ ಆಗಮನವಾಗುತ್ತದೆ.
  • ಸಿಹಿ ಭಾರ್ಗವಿಯನ್ನು ನೋಡಿ ನೀವು ನಿಜವಾಗಲೂ ಬಡ್ಡಿ ಬಂಗಾರಮ್ಮನಂತೆ ಕಾಣಿಸುತ್ತೀರಾ ಎಂದು ಕಾಂಪ್ಲಿಮೆಂಟ್‌ ಕೊಡುತ್ತಾಳೆ.
Seetha Rama: ಬಡ್ಡಿ ಬಂಗಾರಮ್ಮಳಾದ ಸಿಹಿ: ಸೀತಾ ಮನೆಗೆ ಬಂದ ಭಾರ್ಗವಿ ಶಾಕ್‌ ಆಗಿದ್ದೇಕೆ? title=

Seetha Rama Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ಸೀತಾ ರಾಮ ಧಾರವಾಹಿಯಲ್ಲಿ ಸಿಹಿಗೆ ಶಾಲೆಯ ಎರಡು ತಿಂಗಳ ಕಾಲ ಬೇಸಿಗೆ ರಜೆ ನೀಡಿದ್ದಾರೆ. ಆದರಿಂದ ರಜೆ ಸಮಯವನ್ನು ಕಳೆಯಲು ಸಿಹಿ ಅಕ್ಕ ಪಕ್ಕ ಮನೆಯ ಮಕ್ಕಳ ಜೊತೆಗೆ ಸ್ಕಿಟ್‌ವೊಂದರಲ್ಲಿ ಭಾಗವಹಿಸಲು ಬಡ್ಡಿ ಬಂಗಾರಮ್ಮನ ಅವತಾರದಲ್ಲಿ ರೆಡಿಯಾಗುತ್ತಾಳೆ. ಸಿಹಿ ಹಸಿರು ಸೀರೆಯನ್ನು ಉಟ್ಟಿಕೊಂಡು ಕಣ್ಣಗೆ ದೊಡ್ಡ ಕನ್ನಡಕವನ್ನು ಹಾಕಿಕೊಂಡಿರುತ್ತಾಳೆ.

ಸ್ಕಿಟ್‌ ನಡೆಯುವ ಸಂದರ್ಭದಲ್ಲಿ ಶಾಂತಮ್ಮನ ವಠಾರಕ್ಕೆ ಭಾರ್ಗವಿಯ ಆಗಮನವಾಗುತ್ತದೆ. ಭಾರ್ಗವಿ, ರಾಮ ಸೀತಾಯನ್ನು ಪ್ರೀತಿಸುತ್ತಿರುವ ಕಾರಣ, ಆಕೆಯ ಮನೆಗೆ ಕಿತಾಪತಿ ಮಾಡಬೇಕೆಂದುಕೊಂಡು ಹೋಗುತ್ತಾಳೆ. ಆಗ ಸೀತಾಳನ್ನು ಕೇಳಿಕೊಂಡು ಬಂದ ಭಾರ್ಗವಿಯನ್ನು ಸಿಹಿಯೇ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಭಾರ್ಗವಿ ಸಿಹಿ ಸೀತಾಳನ್ನು ಕೇಳಿದಾಗ, ಸೀತಾ ಮನೆಯಲ್ಲಿ ಇಲ್ಲ. ಆಕೆಗಾಗಿ ಸ್ಕೆಚ್ ಪೆನ್, ಡ್ರಾಯಿಂಗ್ ಶೀಟ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಖರೀದಿಸಲು ಖರೀದಿಸಲು ಹೋಗಿದ್ದಾರೆ ಎನ್ನುತ್ತಾಳೆ.

ಇದನ್ನೂ ಓದಿ: Puneeth Rajkumar: ಈ ಒಂದು ಕಾರಣಕ್ಕೆ ಪಾಲಿಟಿಕ್ಸ್‌ನಿಂದ ದೂರವೇ ಉಳಿದಿದ್ರು ಪುನೀತ್‌ ರಾಜ್‌ ಕುಮಾರ್!!

ಅದೇ ಸಂದರ್ಭದಲ್ಲಿ ಸಿಹಿ ಭಾರ್ಗವಿಯನ್ನು ನೋಡಿ ನೀವು ನಿಜವಾಗಲೂ ಬಡ್ಡಿ ಬಂಗಾರಮ್ಮನಂತೆ ಕಾಣಿಸುತ್ತೀರಾ ಎಂದು ಕಾಂಪ್ಲಿಮೆಂಟ್‌ ಕೊಡುತ್ತಾಳೆ. ಬಳಿಕ ಸಹಿ ಮನೆಯೊಳಗೆ ಕರೆದು ಕುಳಿತು ಕೊಳ್ಳಲು ಹೇಳಿ ಕುಡಿಯೋದಕ್ಕೆ ನೀರು ತರುತ್ತೇನೆಮದು ಹೇಳಿ ಅಡುಗೆ ಮನೆಗೆ ಹೋಗುತ್ತಾಳೆ. ಸೀತಾ ಮನೆಗೆ ಬಂದ ಭಾರ್ಗವಿ ಮೊದಲೇ ಸಿಹಿಯನ್ನು ನೋಡಿ ಶಾಕ್‌ ಆಗಿರುತ್ತಾಳೆ. ಸಹಿ ಯಾಕೆ ಸೀತಾಳನ್ನು ಸೀತಮ್ಮ ಅಂತ ಕರಿಯುತ್ತಿದ್ದಾಳೆಂದು ಯೋಚಿಸುತ್ತಿರುತ್ತಾಳೆ.

ಇದೇ ವೇಳೆ ಸೀತಾ ಮನೆಗೆ ಬಂದ ಭಾರ್ಗವಿ ಹಾಲ್‌ನಲ್ಲಿರುವ ಸೀತಾ ಹಾಗೂ ಸಿಹಿ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ನೋಡಿ ಬೆರಗಾಗುತ್ತಾಳೆ. ಸೀತಾಳಿಗೆ ಈಗಾಗಲೇ ಒಂದು ಮದುವೆಯಾಗಿರಬೇಕೆಂದು ಅಂದುಕೊಳ್ಳುತ್ತಾಳೆ. ಅಥವಾ ಸೀತಾ ಬದುಕಿನಲ್ಲಿ ಕಹಿ ಘಟನೆ ನಡೆದಿರಬಹುದು. ಹಾಗಿದ್ರೇ ಸಹಿ ತಂದೆ ಯಾರೆಂಬುದು ಭಾರ್ಗವಿ ತಲೆಯಲ್ಲಿ ಓಡುತ್ತಿದ್ದು, ಇದರಿಂದ ಸೀತಾ ಹಿನ್ನೆಲೆ ತಿಳಿಯಲು ಭಾರ್ಗವಿ ಆಸೆಯಿಂದ ಹೊರಟಿದ್ದಾಳೆ. ಸೀತಾ ಜೀವನದಲ್ಲಿ ಮತ್ತೊಂದು ಬಿರುಗಾಳಿ ಏಳುತ್ತಾ ಎಂಬುದು ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News