ಸ್ನೇಹಾ ಕೊರಳಲ್ಲಿರೋ ತಾಳಿಗಾಗಿ, ಬಂಗಾರಮ್ಮನಿಗೆ ಕೊಟ್ಟಿರೋ ಮಾತನ್ನು ಮೀರ್ತಾಳಾ ಪುಟ್ಟಕ್ಕ?

Puttakkana Makkalu Sneha Kanti Marriage : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಹೆಚ್ಚು ಕುತೂಹಲದಿಂದ ಮೂಡಿಬರುತ್ತಿದೆ. ಇದೀಗ ಕಂಠಿ ಸ್ನೇಹಾಳನ್ನು ಮಾದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ.   

Written by - Savita M B | Last Updated : Jun 30, 2023, 12:28 PM IST
  • ಪುಟ್ಟಕ್ಕನ ಮಕ್ಕಳು ಸಿರೀಯಲ್‌ ದಿನೇ ದಿನೇ ಪ್ರೇಕ್ಷಕರ ಮನಸೆಳೆಯುತ್ತಿದೆ.
  • ಟಿ ಆರ್‌ ಪಿಯಲ್ಲಿಯೂ ಪ್ರಥಮ ಸ್ಥಾನದಲ್ಲಿರುವ ಈ ಧಾರಾವಾಹಿ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.
  • ಇದೀಗ ಸ್ನೇಹಾ ಹಾಗೂ ಕಂಠಿ ಮದುವೆ ಆಗಿದೆ.
ಸ್ನೇಹಾ ಕೊರಳಲ್ಲಿರೋ ತಾಳಿಗಾಗಿ, ಬಂಗಾರಮ್ಮನಿಗೆ ಕೊಟ್ಟಿರೋ ಮಾತನ್ನು ಮೀರ್ತಾಳಾ ಪುಟ್ಟಕ್ಕ? title=

Puttakkana Makkalu : ಪುಟ್ಟಕ್ಕನ ಮಕ್ಕಳು ಸಿರೀಯಲ್‌ ದಿನೇ ದಿನೇ ಪ್ರೇಕ್ಷಕರ ಮನಸೆಳೆಯುತ್ತಿದೆ. ಟಿ ಆರ್‌ ಪಿಯಲ್ಲಿಯೂ ಪ್ರಥಮ ಸ್ಥಾನದಲ್ಲಿರುವ ಈ ಧಾರಾವಾಹಿ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಸ್ನೇಹಾ ಹಾಗೂ ಕಂಠಿ ಮದುವೆ ಆಗಿದೆ. ಬಂಗಾರಮ್ಮನ ಮನೆಗೆ ಸ್ನೇಹಾಳನ್ನು ಕರೆದುಕೊಂಡು ಬಂದು ಅಮ್ಮನನ್ನು ಕರೆಯುತ್ತಾನೆ. ಮಗ ಮನೆಗೆ ಬಂದ ಎನ್ನುವ ಖುಷಿಯಿಂದ ಹೊರಬಂದ ಬಂಗಾರಮ್ಮನಿಗೆ ಕಾದಿತ್ತು ಬಿಗ್‌ ಶಾಕ್‌.

ಹೌದು ಬಂಗಾರಮ್ಮ ಮಗನಿಗೆ ಮದುವೆ ಮಾಡು ನಿರೀಕ್ಷೆಯಲ್ಲಿದ್ದರು ಆದರೆ ಮಗ ಕಂಠಿ ಬೇರೆ ಮದುವೆ ಮಾಡಿಕೊಂಡು ಬಂದಿದ್ದಾನೆ. ತಾನು ತನ್ನ ತಂಗಿ ಗಂಡನ ಮಗಳು ರಾಧೆಗೆ ನಾನೇನು ಹೇಳಲಿ ಎಂದು ಯೋಚಿಸುತ್ತಿದ್ದ ಬಂಗಾರಮ್ಮ ಒಮ್ಮೇಲೆ ಸ್ನೇಹಾಳ ಮೇಲೆ ಕೆಂಡಕಾರುತ್ತಾಳೆ. ಕಂಠಿ ಸ್ನೇಹಾಳನ್ನು ಮನಸಾರೆ ಪ್ರೀತಿಸಿದ್ದ ಇದೇ ಕಾರಣಕ್ಕಾಗಿ ನಾನು ಕೈ ಬಿಡುವುದಿಲ್ಲ ಎಂದು ಯೋಚಿಸುತ್ತಿರುತ್ತಾನೆ. 

ಇದನ್ನೂ ಓದಿ-Lust Stories 2 Twitter Review : ಸಂಪೂರ್ಣವಾಗಿ ಅಶ್ಲೀಲ.. ತಮನ್ನಾ, ಮೃಣಾಲ್.. ಕಾಜೋಲ್ ಒಂದೇ ಅಲ್ಲ!

ಇನ್ನು ಪುಟ್ಟಕ್ಕ ಜೋರಅಗಿ ಅಳುತ್ತಿರುತ್ತಾಳೆ. ತನ್ನ ಮಗಳು ಯಾರನ್ನೋ ಮದುವೆಯಾಗಿ ಬಂದಿದ್ದಾಳೆ ಎಂದು ಗೋಳಾಡುತ್ತಿರುತ್ತಾಳೆ. ಆದರೆ ಸುಮಾ ಮಾತ್ರ ಏನು ಆಗಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದಾಗ ಪುಟ್ಟಕ್ಕಗೆ ಕೋಪ ಬಂದು ಸ್ನೇಹಾ ಮದವೆಯಾಗಿರುವುದು ಬಂಗಾರಮ್ಮನ ಮಗನನ್ನು ಎಂದು ಹೇಳಿದಾಗ ಎಲ್ಲರಿಗು ಶಾಕ್‌ ಆಗುತ್ತದೆ. ಇದನ್ನು ಕೇಳಿದ ಸುಮಾ ಏನು ಮಾತನಾಡಬೇಕೆಂದು ತೋಚದೆ ಮೌನವಾಗುತ್ತಾಳೆ. 

ಬಂಗಾರಮ್ಮ ಕಿರುಚಾಡುತ್ತಿರುತ್ತಾಳೆ. ಕಂಠಿ ಅಮ್ಮನ ಬಳಿಗೆ ಬಂದು ಅವ್ವ ನಿಮ್ಮ ಸೊಸೆಯನ್ನು ಕರೆದುಕೊಂಡು ಬಂದಿದ್ದೇನೆ ಮನೆ ತುಂಬಿಸಿಕೊಳ್ಳಿ ಎಂದು ಹೇಳುತ್ತಾನೆ ಆಗ ಬಂಗಾರಮ್ಮ ನಾನು ಯಾರ್ಯಾರನ್ನೋ ನಣಾಉ ಮನೆಗೆ ತುಂಬಿಸಿಕೊಳ್ಳುವುದಿಲ್ಲ ಎಂದು ಜೋರಾಗಿ ಚೀರುತ್ತಾಳೆ. ಸ್ನೇಹಾ ಕೋಪಾ ತಾಳಲಾರದೇ ಹೇಯ್‌ ಬಂಗಾರಮ್ಮ ಎಂದಾಗ ಕಂಠಿ ಮಿಸ್ಸು.... ಎನ್ನುತ್ತಾನೆ. ಅದಕ್ಕೆ ಸ್ನೇಹಾ ಶ್..‌ ಎಂದು ಹೇಳುತ್ತಾಳೆ.

ಇನ್ನು ಇದನ್ನು ಕೇಳಿಸಿಕೊಂಡ ಕಂಠಿ ಸುಮ್ಮನಾಗುತ್ತಾನೆ. ಆದರೆ ಇಲ್ಲಿ ನಡೆದಿರುವುದಉ ಬೇರೆ ಬಂಗಾರಮ್ಮ ತಿಳಿದುಕೊಂಡಿರುವುದು ಬೇರೆ... ನನ್ನ ಮಗನ್ದು ಏನು ತಪ್ಪಿಲ್ಲ, ಸ್ನೇಹಾನೆ ಕಂಠಿಯನ್ನು ಮದುವೆಯಾಗಿರುವುದು ಎಂದು ತಿಳಿದುಕೊಂಡಿರುತ್ತಾಲೆ. ಇದು ತಪ್ಪು ಎಂದು ಕಂಠಿ ಹೇಳಿದರೂ ಬಂಗಾರಮ್ಮ ಇನ್ನು ಕೋಪಗೊಂಡಿರುತ್ತಾಳೆ. 

ಇದನ್ನೂ ಓದಿ-Sanvi Sudeep: ʻಜಿಮ್ಮಿʼ ಚಿತ್ರದ ಮೂಲಕ ಸುದೀಪ್ ಪುತ್ರಿ ಸಾನ್ವಿ ಸಿನಿರಂಗಕ್ಕೆ ಎಂಟ್ರಿ!

 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Trending News