Seetha Rama: ರಾಮನಿಗೆ ತೆಲೆನೋವು ಕೊಟ್ಟ ಭಾರ್ಗವಿ: ಸೀತಾಳಿಂದ ತಾತನ ಮುಂದೆ ಸಿಹಿಯ ಸತ್ಯ ಬಯಲಾಗುತ್ತಾ.!

Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಸೂರಿಯ ಆರೋಗ್ಯ ಏರುಪೇರಾಗಿದ್ದು,ರಾಮನಿಗೆ ತೆಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಸೀತಾ ತಾತನ ಬಳಿ ಸಿಹಿಯ ವಿಚಾರವನ್ನು ಹೇಳಲು ಹೊರಟ್ಟಿದ್ದಾಳೆ. ಸೀತಾ ಮಗಳ ವಿಚಾರ ಹೇಳುತ್ತಾಳಾ? ಸೂರಿ ಇದನ್ನು ಒಪ್ಪುತ್ತಾನಾ? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Apr 22, 2024, 12:30 PM IST
  • ಸೂರಿಗೆ ಬಿಪಿ ಹೆಚ್ಚಾಗಿದ್ದರಿಂದ ವೈದ್ಯರು ಬಹಳ ಎಚ್ಚರದಿಂದ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ.
  • ಭಾರ್ಗವಿ ರಾಮನನ್ನು ಸೈಡ್ ಗೆ ಕರೆದುಕೊಂಡು ಹೋಗಿ ತಾತನಿಗೆ ಈಗಲೇ ಸತ್ಯ ಹೇಳಬೇಡ ಎಂದು ಹೇಳುತ್ತಾಳೆ.
  • ನಂತರ ಸೀತಾ ತಾತನ ಬಳಿ ಹೋದಾಗ ಸೂರು ಯಾವಾಗ ನಿಮ್ಮ ಮನೆಗೆ ಬರುಬಹುದು ಎಂದಾಗ ಸೀತಾ ನನೆಗೆ ಅಪ್ಪ ಅಮ್ಮ ಇಲ್ಲ ಎಂದು ಹೇಳುತ್ತಾಳೆ.
Seetha Rama: ರಾಮನಿಗೆ ತೆಲೆನೋವು ಕೊಟ್ಟ ಭಾರ್ಗವಿ: ಸೀತಾಳಿಂದ ತಾತನ ಮುಂದೆ ಸಿಹಿಯ ಸತ್ಯ ಬಯಲಾಗುತ್ತಾ.! title=

Seetha Reveals Truth About Sihi: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ʻಸೀತಾ ರಾಮʼ ಧಾರವಾಹಿಯಲ್ಲಿ ತಾತಾ ಸೂರಿಯ ಆರೋಗ್ಯದಲ್ಲಿ ಇದ್ದಕ್ಕಿದ್ದ ಹಾಗೆಯೇ ಏರುಪೇರಾಗಿದ್ದು, ಇದರಿಂದ 
ಮನೆಯವರೆಲ್ಲರೂ ಗಾಬರಿಯಾಗಿದ್ದಾರೆ. ಸೂರಿಗೆ ಬಿಪಿ ಹೆಚ್ಚಾಗಿದ್ದರಿಂದ ವೈದ್ಯರು ಬಹಳ ಎಚ್ಚರದಿಂದ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ. ಆದರೆ, ಸೂರಿಗೆ ಮೊಮ್ಮಗ ರಾಮ ಮದುವೆಯನ್ನು ಮಾಡಬೇಕು ಎಂಬ ಆಸೆಯಿರುವುದರಿಂದ ಸೀತೆಯನ್ನು ಮನೆಗೆ ಕರೆಸು. ಅವಳ ಜೊತೆಗೆ ಮಾತನಾಡಬೇಕು ಎಂದು ಹೇಳುತ್ತಾನೆ

ಅಷ್ಟೇ ಅಲ್ಲದೆ ಸೂರಿ ರಾಮನಿಗೆ ನಿಮ್ಮಿಬ್ಬರ ಮದುವೆ ಬಗ್ಗೆ ಚರ್ಚಿಸಬೇಕು. ಹಾಗೆಯೇ ಸೀತಾ ಮನೆಯಲ್ಲಿ ಯಾರು ಯಾರು ಇದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದು ಹೇಳುತ್ತಾನೆ. ಆಗ ರಾಮ್‌ ಕೋಪದಲ್ಲಿ ಅದಕ್ಕೆ ಈಗಲೇ ಅವಸರವೇನು. ಮೊದಲು ನೀನು ಚೇತರಿಸಿಕೋ, ಸೀತಾ ಮನೆಯಲ್ಲಿ ಇರೋದು ಇಬ್ಬರೇ ಎಂದಾಗ ರಾಮನನ್ನು ಭಾರ್ಗವಿ ತಡೆಯುತ್ತಾಳೆ. ನಂತರ ಭಾರ್ಗವಿ ರಾಮನನ್ನು ಸೈಡ್ ಗೆ ಕರೆದುಕೊಂಡು ಹೋಗಿ ತಾತನಿಗೆ ಈಗಲೇ ಸತ್ಯ ಹೇಳಬೇಡ. ನಾನು ಮಾವನ ಬಳಿ ಸೀತಾಳಿಗೆ ಸಿಹಿ ಮಗಳು ಎಂಬ ಸತ್ಯವನ್ನು ಹೇಳಿಲ್ಲ ಎಂದು ಹೇಳುತ್ತಾಳೆ. 

ಇದನ್ನೂ ಓದಿ:  Rakhi Sawant: ಬಾಲಿವುಡ್‌ ಡ್ರಾಮಾ ಕ್ವೀನ್‌ಗೆ ಜಾಮೀನು ಅರ್ಜಿ ರದ್ದು: ಜೈಲು ಸೇರುತ್ತಾರಾ ರಾಖಿ..!

ಭಾರ್ಗವಿ ರಾಮನ ಮುಂದೆ ಸಿಹಿಯ ವಿಚಾರವನ್ನು ಹೇಳಿದರೆ, ಮಾವ ಸೀತಾಳನ್ನು ಒಪ್ಪುವುದಿಲ್ಲ ಎಂದು ಮುಚ್ಚಿಟ್ಟಿದ್ದೀನಿ. ನಿಧಾನವಾಗಿ ಹೇಳಬೇಕು ಎಂದುಕೊಂಡೆ. ಆದರೆ, ಮಾವನ ಆರೋಗ್ಯ ದಿನೇ ದಿನೇ ಕ್ಷಿಣಿಸುತ್ತಿದೆ ಎಂದು ಹೇಳುತ್ತಾಳೆ.ಇದರಿಂದ ರಾಮನಿಗೆ ದೊಡ್ಡ ತಲೆನೋವು ಶುರುವಾಗಿದೆ. ಇವರಿಬ್ಬರ ಮಾತುಗಳನ್ನು ಕೇಳಿಸಿಕೊಂಡ ಸತ್ಯ ಸುಮ್ಮನಿರಲಾರದೇ ತನ್ನ ಅತ್ತಿಗೆ ಭಾರ್ಗವಿಗೆ ರಾಮನ ಬಾಳಲ್ಲಿ ಆಟವಾಡಬೇಡ ಎಂದು ವಾರ್ನಿಂಗ್ ಕೊಟ್ಟಿದ್ದಾನೆ.

ಭಾರ್ಗವಿಗೆ ಸತ್ಯ ವಾಣಿ ಅತ್ತಿಗೆಯನ್ನು ನೀನು ಕೊಲೆ ಮಾಡಿ ನನ್ನ ತಲೆಗೆ ಕಟ್ಟಿದೆ. ಆದರೆ, ಇವತ್ತಲ್ಲ ನಾಳೆ ಆ ಸತ್ಯ ಎಲ್ಲರಿಗೂ ಗೊತ್ತಾಗೇ ಗೊತ್ತಾಗುತ್ತೆ. ಈಗ ರಾಮ ಮತ್ತು ಸೀತಾ ಮದುವೆ ವಿಚಾರದಲ್ಲಿ ಆಟವಾಡಲು ನೋಡಬೇಡ. ಅವರಿಬ್ಬರ ಮದುವೆ ನಡೆದೇ ನಡೆಯುತ್ತದೆ. ನೀನು ಸೀತಾ ರಾಮನನ್ನು ಬೇರೆ ಮಾಡುವುದಕ್ಕೆ ಆಗುವುದಿಲ್ಲ. ರಾಮ್ ಬಾಳಲ್ಲಿ ಆಟವಾಡಲು ನೋಡಿದರೆ, ನಾನಂತೂ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.

ಇದನ್ನೂ ಓದಿ: ʼಆ‌ʼ ಖ್ಯಾತ ನಟಿಯಿಂದಲೇ ನಾಗಚೈತನ್ಯ-ಸಮಂತಾ ದೂರಾವದರೇ? ಅನುಮಾನಕ್ಕೆ ಕಾರಣವಾದ ವೈರಲ್ ಪೋಸ್ಟ್ !!

ಇನ್ನೊಂದು ಕಡೆ ರಾಮನ ಮನೆಗೆ ಬಂದ ಸೀತಾ ನನಗೆ ಮಗಳಿದ್ದರೂ ಇಲ್ಲದಿರುವ ಹಾಗೆ ಮುಚ್ಚಿಡಬೇಕ. ನನಗೆ ಸತ್ಯ ಮುಚ್ಚಿಡಲು ಇಷ್ಟವಿಲ್ಲ ಎಂದು ರಾಮ್‌ ಮುಂದೆ ಹೇಳುತ್ತಾಳೆ. ಆಗ ರಾಮ್‌ ನಿಮ್ಮ ಮನಸಿಗೆ ಹೇಗೆ ಸರ ಅನ್ನಿಸುತ್ತೋ ಹಾಗೆ ಮಾಡಿಯೆಂದು ಹೇಳುತ್ತಾನೆ. ಆಗ ಭಾರ್ಗವಿ ನೀನೆ ನಮ್ಮ ಮಾಯ್ಯನ್ನ ಉಳಿಸಿಕೊಡಬೇಕು ಎಂದು ಹೇಳುತ್ತಾಳೆ. ನಂತರ ಸೀತಾ ತಾತನ ಬಳಿ ಹೋದಾಗ ಸೂರು ಯಾವಾಗ ನಿಮ್ಮ ಮನೆಗೆ ಬರುಬಹುದು ಎಂದಾಗ ಸೀತಾ ನನೆಗೆ ಅಪ್ಪ ಅಮ್ಮ ಇಲ್ಲ ಎಂದು ಹೇಳುತ್ತಾಳೆ. ಮುಂದೆ ಸಿಹಿಯ ಬಗ್ಗೆಯೂ ಹೇಳುತ್ತಾಳಾ ಎಂದು ಕಾದುನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News