Mamata Banerjee: ಪ್ರಧಾನಿಗಳಿಗೆ ಯಾರ ಮೌಲ್ಯಮಾಪನದ ಅವಶ್ಯಕತೆ ಇಲ್ಲ, ಮಮತಾ CBI-ED ಹೇಳಿಕೆಗೆ ಬಿಜೆಪಿ ತಿರುಗೇಟು

Mamata Banerjee On BJP: ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಬನ್ನಿ ಬಿಜೆಪಿ ಹೇಳಿದ್ದೇನು ತಿಳಿದುಕೊಳ್ಳೋಣ  

Written by - Nitin Tabib | Last Updated : Sep 20, 2022, 09:57 PM IST
  • ಬಿಜೆಪಿಯಲ್ಲಿರುವ ಯಾರಿಗೂ ಮತ್ತು ಖಂಡಿತವಾಗಿಯೂ ಪ್ರಧಾನಿಗೆ
  • ಮಮತಾ ಬ್ಯಾನರ್ಜಿಯಿಂದ ಯಾವುದೇ ಮನ್ನಣೆ ನೀಡುವ ಅವಶ್ಯಕತೆ ಇಲ್ಲ
  • ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
Mamata Banerjee: ಪ್ರಧಾನಿಗಳಿಗೆ ಯಾರ ಮೌಲ್ಯಮಾಪನದ ಅವಶ್ಯಕತೆ ಇಲ್ಲ, ಮಮತಾ CBI-ED ಹೇಳಿಕೆಗೆ ಬಿಜೆಪಿ ತಿರುಗೇಟು title=
BJP On Mamata Banerjee

Mamata Banerjee Statement On PM Modi: ಸಿಬಿಐ ಮತ್ತು ಇಡಿ ದುರ್ಬಳಕೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೈವಾಡವಿದೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ (ಸೆಪ್ಟೆಂಬರ್ 20, 2022) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಸರ್ಟಿಫಿಕೆಟ್ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಬಿಜೆಪಿಯಲ್ಲಿರುವ ಯಾರಿಗೂ ಮತ್ತು ಖಂಡಿತವಾಗಿಯೂ ಪ್ರಧಾನಿಗೆ ಮಮತಾ ಬ್ಯಾನರ್ಜಿಯಿಂದ ಯಾವುದೇ ಮನ್ನಣೆ ನೀಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.

ಮಮತಾ ಹೇಳಿಕೆಗೆ ಬಿಜೆಪಿ ತಿರುಗೇಟು
ನ್ಯಾಯಾಲಯಗಳು ತನಿಖೆಗೆ ಆದೇಶಿಸಿರುವುದರಿಂದ ಅವರ (ಮಮತಾ ಬ್ಯಾನರ್ಜಿ) ಇಡೀ ಸರ್ಕಾರ, ಉನ್ನತ ಸಚಿವರು, ಪಕ್ಷದ ಪದಾಧಿಕಾರಿಗಳು ಮತ್ತು ಕುಟುಂಬ ಸದಸ್ಯರು ಕೇಂದ್ರ ಏಜೆನ್ಸಿಗಳ ರೇಡಾರ್‌ನಲ್ಲಿದ್ದಾರೆ ಎಂದು ಅಮಿತ್ ಮಾಳವೀಯಾ ಹೇಳಿದ್ದಾರೆ. ಅವರು ಲೂಟಿ ಮಾಡಿರುವುದರ ಲೆಕ್ಕ ನೀಡಬೇಕಾಗಲಿದೆ... ಬಿಜೆಪಿ ನಾಯಕರ ಒಂದು ವಿಭಾಗವು ತಮ್ಮ ಹಿತಾಸಕ್ತಿಗಳನ್ನು ಪೂರೈಸಲು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ಮೋದಿ ಕುರಿತು ಈ ಹೇಳಿಕೆ ನೀಡಿದ್ದರು.

ಇದನ್ನೂ ಓದಿ-Road Safety: ಇನ್ಮುಂದೆ ರಸ್ತೆಯ ಮೇಲೆ ವೇಗವಾಗಿ ಕಾರ್-ಬೈಕ್ ಗಳು ಓಡುವುದಿಲ್ಲ, ಬದಲಾಗುತ್ತಿವೆ ಸ್ಪೀಡ್ ಹಾಗೂ ಹಾರ್ನ್ ಗೆ ಸಂಬಂಧಿಸಿದ ನಿಯಮಗಳು

ಬಿಜೆಪಿ ಮೇಲೆ ಆರೋಪ ಮಾಡಿದ್ದ ಮಮತಾ ದಿದಿ 
ನಿತ್ಯ ವಿರೋಧ ಪಕ್ಷಗಳ ನಾಯಕರಿಗೆ ಬಿಜೆಪಿ ನಾಯಕರು ಸಿಬಿಐ ಮತ್ತು ಇಡಿ ಬಂಧನದ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೇಶದ ಕೇಂದ್ರೀಯ ಸಂಸ್ಥೆಗಳು ಈ ರೀತಿ ಕೆಲಸ ಮಾಡಬೇಕೆ? ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಎಂದು ನನಗೆ ಅನಿಸುವುದಿಲ್ಲ, ಆದರೆ ಕೆಲವು ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ-Dussehra Rally ಶಿವಾಜಿ ಪಾರ್ಕ್ ನಲ್ಲಿಯೇ ನಡೆಯಲಿದೆ, ಅನುಮತಿ ಸಿಗಲಿ ಅಥವಾ ಸಿಗದಿರಲಿ: ಉದ್ಧವ್ ಬಣದ ಘೋಷಣೆ

ಇಡಿ ರಾಡಾರ್‌ನಲ್ಲಿ ಅನೇಕ ಟಿಎಂಸಿ ನಾಯಕರು
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಕೆಲ ಹಿರಿಯ ನಾಯಕರು ಆರೋಪಿಗಳಾಗಿದ್ದು, ರಾಜ್ಯದಲ್ಲಿ ಸಿಬಿಐ ಮತ್ತು ಇಡಿಯಂತಹ ಕೇಂದ್ರೀಯ ಸಂಸ್ಥೆಗಳು ಅವರನ್ನು ತನಿಖೆಗೆ ಒಳಪಡಿಸಿವೆ. ಪ್ರಧಾನಿ ಕಚೇರಿಗೆ ವರದಿ ಸಲ್ಲಿಸುತ್ತಿದ್ದ ಸಿಬಿಐ ಇದೀಗ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿದೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಹೇಳಿದ್ದಾರೆ. ಕೇಂದ್ರೀಯ ಸಂಸ್ಥೆಗಳ ಅತಿರೇಕವನ್ನು ಪ್ರಧಾನಿ ಗಮನಿಸಬೇಕು ಎಂದು ಮಮತಾ ಆಗ್ರಹಿಸಿದ್ದರು. ಕೇಂದ್ರ ಸರ್ಕಾರದ ಕಾರ್ಯವೈಖರಿ ಮತ್ತು ಅವರ ಪಕ್ಷದ ಹಿತಾಸಕ್ತಿ ಬೆರೆಯದಂತೆ ಪ್ರಧಾನಿಗಳು ನೋಡಿಕೊಳ್ಳಬೇಕು ಎಂದು ಮಮತಾ ಸಲಹೆ ನೀಡಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News