Red Fort: ಕೆಂಪು ಕೋಟೆ ನಮ್ಮ ಆಸ್ತಿ, ನಮಗೆ ನೀಡಿ, ಇಲ್ಲವೇ ಹಣ ಕೊಡಿ: ಹೈಕೋರ್ಟ್‌ಗೆ ಮಹಿಳೆಯ ಮನವಿ

Ownership Of Red Fort: ಮೊಘಲ್‌ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಬಹದ್ದೂರ್‌ ಷಾ ಜಾಫರ್‌ II ಅವರ ಕಾನೂನುಬದ್ಧ ಉತ್ತರಾಧಿಕಾರಿ ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬರು ಕೆಂಪು ಕೋಟೆಯ ಮಾಲೀಕತ್ವ ಕೋರಿ ಅರ್ಜಿ ಸಲ್ಲಿಸಿದ್ದರು. 

Edited by - Zee Kannada News Desk | Last Updated : Dec 21, 2021, 02:22 PM IST
  • ಕೆಂಪು ಕೋಟೆ ನಮ್ಮ ಆಸ್ತಿ.. ನಮಗೆ ನೀಡಿ, ಇಲ್ಲವೇ ಹಣ ಕೊಡಿ
  • ಐತಿಹಾಸಿಕ ಕೆಂಪು ಕೋಟೆಯ ಮೇಲೆ ಹಕ್ಕು ಮಂಡಿಸಿ ದೆಹಲಿ ಹೈ ಕೋರ್ಟ್‌ಗೆ ಅರ್ಜಿ
  • Red Fort ಮಾಲೀಕತ್ವ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌
  • ಮೊಘಲ್‌ ದೊರೆ ಬಹದ್ದೂರ್‌ ಷಾ ಜಾಫರ್‌ II ಮೊಮ್ಮಗನ ಪತ್ನಿ ಸುಲ್ತಾನ ಬೇಗಂ ಎಂಬವರು ಸಲ್ಲಿಸಿದ್ದ ಅರ್ಜಿ
Red Fort: ಕೆಂಪು ಕೋಟೆ ನಮ್ಮ ಆಸ್ತಿ, ನಮಗೆ ನೀಡಿ, ಇಲ್ಲವೇ ಹಣ ಕೊಡಿ: ಹೈಕೋರ್ಟ್‌ಗೆ ಮಹಿಳೆಯ ಮನವಿ title=
ಕೆಂಪು ಕೋಟೆ

ನವದೆಹಲಿ: ಮೊಘಲ್‌ (Mughals) ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಬಹದ್ದೂರ್‌ ಷಾ ಜಾಫರ್‌ II ಅವರ ಕಾನೂನುಬದ್ಧ ಉತ್ತರಾಧಿಕಾರಿ ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬರು ಕೆಂಪು ಕೋಟೆಯ ಮಾಲೀಕತ್ವ ಕೋರಿ ಸಲ್ಲಿಸಿದ್ದ ಅರ್ಜಿಯನ್ನು (Woman Claims Ownership Of Red Fort) ದೆಹಲಿ ಹೈಕೋರ್ಟ್‌ ( Delhi High Court) ಸೋಮವಾರ ತಿರಸ್ಕರಿಸಿದೆ. 

ಸುಲ್ತಾನಾ ಬೇಗಂ, ತಾನು ಬಹದ್ದೂರ್ ಷಾ ಜಾಫರ್ II ರ ಮೊಮ್ಮಗನ ಹೆಂಡತಿ ಎಂದು ಹೇಳಿಕೊಂಡಳು. 1857 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯದ ಯುದ್ಧದ ನಂತರ ಆಕೆಯ ಕುಟುಂಬವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಅವರ ಆಸ್ತಿಯಿಂದ ವಂಚಿತವಾಗಿದೆ ಎಂದು ವಾದಿಸಲಾಯಿತು. ನಂತರ ಬಹದ್ದೂರ್ ಷಾ ಜಾಫರ್ ಅವರನ್ನು ದೇಶದಿಂದ ಗಡಿಪಾರು ಮಾಡಲಾಯಿತು ಮತ್ತು ಕೆಂಪು ಕೋಟೆಯ (Red Fort) ಸ್ವಾಮ್ಯವನ್ನು ಮೊಘಲರಿಂದ ತೆಗೆದುಕೊಳ್ಳಲಾಯಿತು.  68 ವರ್ಷದ ಸುಲ್ತಾನಾ ಬೇಗಂ ಆಪಾದಿತ ಅಕ್ರಮ ಆಸ್ತಿಗಾಗಿ ಸರ್ಕಾರದಿಂದ ಪರಿಹಾರವನ್ನು ಕೋರಿ ಮನವಿ ಸಲ್ಲಿಸಿದ್ದರು.

ಪಶ್ಚಿಮ ಬಂಗಾಳದ ಹೌರಾದ ಕೊಳೆಗೇರಿಯ ನಿವಾಸಿಯಾಗಿರುವ ಸುಲ್ತಾನಾ (Sultana Begum) ಅವರು ಮೊಘಲ್ ಚಕ್ರವರ್ತಿಯ ಮೊಮ್ಮಗ ಮಿರ್ಜಾ ಮೊಹಮ್ಮದ್ ಬೇಡರ್ ಬಖ್ತ್ ಅವರ ಪತ್ನಿ ಎಂದು ಹೇಳಿ ಈ ಅರ್ಜಿ ಸಲ್ಲಿಸಿದ್ದರು. ಅವರು "ರಂಗೂನ್‌ನಿಂದ ಯಶಸ್ವಿಯಾಗಿ ತಪ್ಪಿಸಿಕೊಂಡರು" ಎಂದು ಹೇಳಿದರು. 1960 ರಲ್ಲಿ ಭಾರತ ಸರ್ಕಾರವು ಬಹದ್ದೂರ್ ಷಾ II (Bahadur Shah II) ರ ಉತ್ತರಾಧಿಕಾರಿಯಾಗಿ ಬಖ್ತ್ ಅವರನ್ನು ಗುರುತಿಸಿತು ಮತ್ತು ಹಿಂದಿನವರ ಮರಣದ ನಂತರ ಅವರು ಪಿಂಚಣಿ ಪಡೆಯಲು ಪ್ರಾರಂಭಿಸಿದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

"ಮೊದಲು ನ್ಯಾಯಾಲಯವನ್ನು ಸಂಪರ್ಕಿಸಲು ವಿಳಂಬ ಮಾಡಿದ ಕಾರಣ ವಿವರಿಸಿ. ನೀವು ಮಾಲೀಕರಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಮರೆತುಬಿಡಿ. ನಿಮ್ಮ ಅರ್ಜಿಯ ಮೊದಲ ಸಾಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ (British East India Company) ನಿಮಗೆ ಅನ್ಯಾಯವಾಗಿದೆ ಎಂಬುದಾಗಿದೆ ಎಂದು ನ್ಯಾಯಮೂರ್ತಿ ರೇಖಾ ಪಾಲಿ ವಿಚಾರಣೆಯ ಆರಂಭದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಿಗೆ ಹೇಳಿದರು. 

150 ವರ್ಷಗಳ ವಿಳಂಬ ಏಕೆ?

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಾಲಿ ಅವರ ಪೀಠ, ನ್ಯಾಯಾಲಯದ ಮೆಟ್ಟಿಲೇರಲು ಕುಟುಂಬದಲ್ಲಿ 150 ವರ್ಷಕ್ಕೂ ಹೆಚ್ಚು ವಿಳಂಬ ಏಕೆ ಎಂದು ವಕೀಲರನ್ನು ಪ್ರಶ್ನಿಸಿತು. "ನನ್ನ ಇತಿಹಾಸವು ತುಂಬಾ ದುರ್ಬಲವಾಗಿದೆ. ಆದರೆ 1857 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ನಿಮಗೆ ಅನ್ಯಾಯವಾಗಿದೆ ಎಂದು ನೀವು ಹೇಳುತ್ತೀರಿ. 150 ವರ್ಷಗಳಷ್ಟು ವಿಳಂಬ ಏಕೆ? ಇಷ್ಟು ವರ್ಷ ಏನು ಮಾಡುತ್ತಿದ್ದಿರಿ?" ಎಂದು ನ್ಯಾಯಮೂರ್ತಿ ಪಾಲಿ ಕೇಳಿದರು.

ಅರ್ಜಿದಾರರು ಕೊನೆಯ ಮೊಘಲ್ ಚಕ್ರವರ್ತಿಗೆ ಸಂಬಂಧಿಸಿದ್ದರು ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಗೆ ಟ್ರಾನ್ಸ್‌ಜೆಂಡರ್‌ಗಳ ನೇಮಕ.. ತೃತೀಯ ಲಿಂಗಿಗಳಿಂದ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News