₹40,000 crore scam: ಯತ್ನಾಳ್ ಹೇಳಿದ ಆ ‘ರಾತ್ರಿ ರಹಸ್ಯ’ ಯಾವುದು ವಿಜಯೇಂದ್ರ?- ಕಾಂಗ್ರೆಸ್

ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, 40 ಸಾವಿರ ಕೋಟಿಯಲ್ಲಿ ಬಿಜೆಪಿಯ ದೆಹಲಿ ನಾಯಕರಿಗೆ ಪಾಲೆಷ್ಟು?, ರಾಜ್ಯದ ನಾಯಕರ ಪಾಲೆಷ್ಟು?, ಹೆಣದಿಂದ ಸಂಪಾದಿಸಿದ ಈ ಪಾಪದ ಹಣದಿಂದ ಮಾಲ್ಡಿವ್ಸ್‍ನಲ್ಲಿ ತಾವು ಹೂಡಿಕೆ ಮಾಡಿದ್ದೆಷ್ಟು? ಅಮೆರಿಕದಲ್ಲಿ ಖರೀದಿಸಿದ ಮನೆಗಳೆಷ್ಟು? ಫಾರ್ಮ್ ಲ್ಯಾಂಡ್‌ಗಳೆಷ್ಟು? ಮತ್ತು ದುಬೈನಲ್ಲಿ ಮಾಡಿದ ಆಸ್ತಿಗಳೆಷ್ಟು? ಮಾತಾಡಿ ವಿಜಯೇಂದ್ರ ಮಾತಾಡಿ! ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Dec 28, 2023, 04:06 PM IST
  • ಚೆಕ್, RTGS ಮತ್ತು ಕ್ಯಾಶ್ ಲಂಚದ ಮಾದರಿ ಬಳಿಕ ಲಂಚದ ಮತ್ತೊಂದು ಸ್ವರೂಪ ಹೊರಬಂದಿದೆ
  • ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ ಆ "ರಾತ್ರಿ ರಹಸ್ಯ" ಯಾವುದು ವಿಜಯೇಂದ್ರ ಅವರೇ?
  • ರಾಜ್ಯವನ್ನು ದುಶ್ಚಟಗಳಿಗೆ ಬಲಿ ಕೊಡಲಾಗಿತ್ತೆ? ರಾಜ್ಯವನ್ನು "ರಾತ್ರಿ ವ್ಯವಹಾರ"ಗಳಿಂದ ಆಳಲಾಗುತ್ತಿತ್ತೇ?
₹40,000 crore scam: ಯತ್ನಾಳ್ ಹೇಳಿದ ಆ ‘ರಾತ್ರಿ ರಹಸ್ಯ’ ಯಾವುದು ವಿಜಯೇಂದ್ರ?- ಕಾಂಗ್ರೆಸ್ title=
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ವೇಳೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ 40 ಸಾವಿರ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ ಆ "ರಾತ್ರಿ ರಹಸ್ಯ" ಯಾವುದು ವಿಜಯೇಂದ್ರ ಅವರೇ?’ ಎಂದು ಪ್ರಶ್ನಿಸಿದೆ.  ರಾಜ್ಯವನ್ನು ದುಶ್ಚಟಗಳಿಗೆ ಬಲಿ ಕೊಡಲಾಗಿತ್ತೆ?, ರಾಜ್ಯವನ್ನು "ರಾತ್ರಿ ವ್ಯವಹಾರ"ಗಳಿಂದ ಆಳಲಾಗುತ್ತಿತ್ತೇ? ಇದುವರೆಗೂ ಚೆಕ್, RTGS ಮತ್ತು ಕ್ಯಾಶ್ ಬಗೆಯ ಲಂಚದ ಮಾದರಿ ಇದ್ದವು. ಈಗ ರಾತ್ರಿ ವ್ಯವಸ್ಥೆಯೂ ಲಂಚದ ಮತ್ತೊಂದು ಸ್ವರೂಪ ಹೊರಬಂದಿದೆ. ಇಂತಹ ಗಂಭೀರ ಸಂಗತಿ ಬಯಲಾದರೂ ಬಿಜೆಪಿ ರಾಜ್ಯಾಧ್ಯಕ್ಷರು ಮೌನ ಮುರಿಯದಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಬಳಿ ರಸ್ತೆ ಸಂಪೂರ್ಣ ಬಂದ್

‘ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, 40 ಸಾವಿರ ಕೋಟಿಯಲ್ಲಿ ಬಿಜೆಪಿಯ ದೆಹಲಿ ನಾಯಕರಿಗೆ ಪಾಲೆಷ್ಟು?, ರಾಜ್ಯದ ನಾಯಕರ ಪಾಲೆಷ್ಟು?, ಹೆಣದಿಂದ ಸಂಪಾದಿಸಿದ ಈ ಪಾಪದ ಹಣದಿಂದ ಮಾಲ್ಡಿವ್ಸ್‍ನಲ್ಲಿ ತಾವು ಹೂಡಿಕೆ ಮಾಡಿದ್ದೆಷ್ಟು? ಪಾಲುದಾರರು ಯಾರಿದ್ದಾರೆ?, ಅಮೆರಿಕದಲ್ಲಿ ಖರೀದಿಸಿದ ಮನೆಗಳೆಷ್ಟು? ಫಾರ್ಮ್ ಲ್ಯಾಂಡ್‌ಗಳೆಷ್ಟು? ಮತ್ತು ದುಬೈನಲ್ಲಿ ಮಾಡಿದ ಆಸ್ತಿಗಳೆಷ್ಟು? ಮಾತಾಡಿ ವಿಜಯೇಂದ್ರ ಮಾತಾಡಿ!’ ಎಂದು ಕಾಂಗ್ರೆಸ್ ಕುಟುಕಿದೆ.

‘45 ರೂ.ನ ಒಂದು ಮಾಸ್ಕಿಗೆ 480 ರೂಪಾಯಿ ಬಿಲ್!, ಒಂದು ದಿನಕ್ಕೆ ಒಂದು ಬೆಡ್ ಗೆ 20 ಸಾವಿರ ಬಾಡಿಗೆ!, ದಿನಕ್ಕೆ 20 ಸಾವಿರ ಬಾಡಿಗೆಯ 10 ಸಾವಿರ ಹಾಸಿಗೆಗಳು! ಮತ್ತು ಆ 10 ಸಾವಿರ ಬಾಡಿಗೆ ಹಾಸಿಗೆಗಳ ಕ್ವಾರಂಟೈನ್ ಕೇಂದ್ರ ಬಳಕೆಯೇ ಆಗಿಲ್ಲ! ಕ್ವಾರಂಟೈನ್ ಸೆಂಟರ್ ಹೆಸರಲ್ಲಿ, ಮಾಸ್ಕುಗಳಲ್ಲಿ ಲೂಟಿ ಹೊಡೆದ ಹಣಕ್ಕೆ ಎಷ್ಟು ಸೊನ್ನೆ ಬಿಜೆಪಿ ಮತ್ತು ವಿಜಯೇಂದ್ರ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಕಾರ್ಯಕರ್ತರ ಕೋಪಕ್ಕೆ BMTC ಬಸ್‌ ಗ್ಲಾಸ್‌ ಪೀಸ್‌ ಪೀಸ್‌

‘ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, ಕೋವಿಡ್ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನೂ ನೀವೇ ನೋಡಿಕೊಂಡಿದ್ದಾ? 40 ಸಾವಿರ ಕೋಟಿ ಹಗರಣದ ಆರೋಪವೆಂದರೆ ಸಣ್ಣ ಮಾತಲ್ಲ, ನಿಮ್ಮದೇ ಪಕ್ಷದವರು ಇಂತಹ ಗಂಭೀರ ಆರೋಪ ಮಾಡಿದರೂ ತಾವು ತುಟಿ ಬಿಚ್ಚದಿರುವುದೇಕೆ? ಆರ್.ಅಶೋಕ್ ಅವರೇ, ಈ ಹಗರಣದ ಬಗ್ಗೆ ರಾಜ್ಯದ ಜನತೆಗೆ ಉತ್ತರಿಸುವುದು ನಿಮ್ಮ ಕರ್ತವ್ಯ. ಪಲಾಯನವಾದ ಅನುಸರಿಸುತ್ತಿರುವುದೇಕೆ? ಬಿಜೆಪಿಯವರೇ ಹೇಳುವ ದಮ್ಮು ತಾಕತ್ತು ಇದ್ದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರು ಈ ಹಗರಣದ ನ್ಯಾಯಾಂಗ ತನಿಖೆಗೆ ಒಪ್ಪುವರೇ?’ ಎಂದು ಕಾಂಗ್ರೆಸ್ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News