CSK vs RCB, IPL 2024: ನಾವು ಗೆಲ್ಲಲು ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣ- ದಿನೇಶ್‌ ಕಾರ್ತಿಕ್

Indian Premier League 2024: ಯಶ್‌ ದಯಾಳ್‌ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ‌ ಎಂ.ಎಸ್. ಧೋನಿ 110 ಮೀಟರ್ ಸಿಕ್ಸರ್ ಬಾರಿಸಿದರು. ಈ ವೇಳೆ ಚೆಂಡು ಕ್ರೀಡಾಂಗಣದ ಹೊರಗೆ ಬಿದ್ದಿತು. ಇದರಿಂದ ನಮಗೆ ಹೊಸ ಚೆಂಡು ಸಿಕ್ಕಿತು. ಹೀಗಾಗಿ ನಮಗೆ ಗೆಲುವು ಸುಲಭವಾಯಿತು ಎಂದು ಕಾರ್ತಿಕ್‌ ಹೇಳಿದ್ದಾರೆ.  

Written by - Puttaraj K Alur | Last Updated : May 19, 2024, 06:15 PM IST
  • ಚೆನ್ನೈ ವಿರುದ್ಧ ಕೊನೆಯ ಓವರ್‌ನಲ್ಲಿ ಅದ್ಭುತ ಬೌಲಿಂಗ್‌ ಮಾಡಿದ ಯಶ್‌ ದಯಾಳ್‌
  • ಚೆನ್ನೈ ವಿರುದ್ಧ ರಣರೋಚಕ ಗೆಲುವು ಸಾಧಿಸಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಆರ್‌ಸಿಬಿ
  • ನಾವು ಗೆಲ್ಲಲು ಎಂ.ಎಸ್.ಧೋನಿ ಸಿಡಿಸಿದ ಸಿಕ್ಸರ್‌ ಕಾರಣವೆಂದ ದಿನೇಶ್‌ ಕಾರ್ತಿಕ್‌
CSK vs RCB, IPL 2024: ನಾವು ಗೆಲ್ಲಲು ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣ- ದಿನೇಶ್‌ ಕಾರ್ತಿಕ್ title=
CSK vs RCB

ಬೆಂಗಳೂರು: ನಾವು ಗೆಲ್ಲಲು ಎಂ.ಎಸ್.ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣವೆಂದು ವಿಕೆಟ್‌ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 27 ರನ್‌ಗಳ ರಣರೋಚಕ ಗೆಲುವು ಸಾಧಿಸಿತು. 

ಟಾಸ್‌ ಗೆದ್ದ ಚೆನ್ನೈ ಫೀಲ್ಡಿಂಗ್‌ ಆಯ್ತುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 218 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಆರ್‌ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್(54), ವಿರಾಟ್‌ ಕೊಹ್ಲಿ(47), ರಜತ್ ಪಾಟಿದಾರ್(41), ಕ್ಯಾಮರೂನ್ ಗ್ರೀನ್(38), ಗ್ಲೆನ್ ಮ್ಯಾಕ್ಸ್‌ವೆಲ್(16) ಮತ್ತು ದಿನೇಶ್‌ ಕಾರ್ತಿಕ್‌ (14) ರನ್‌ ಗಳಿಸಿದರು. 

ಇದನ್ನೂ ಓದಿ: IPL 2024, CSK vs RCB: ಅಂಪೈರ್​​ಗಳ ಜೊತೆ ವಿರಾಟ್‌ ಕೊಹ್ಲಿ ವಾಗ್ವಾದ, ಕಾರಣವೇನು?

219 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ CSKಗೆ ಪ್ಲೇಆಫ್‌ ಅರ್ಹತೆ ಪಡೆಯಲು 201 ರನ್‌ಗಳ ಅವಶ್ಯಕತೆಯಿತ್ತು. ರೋಚಕವಾಗಿ ಚೇಸಿಂಗ್‌ ನಡೆಸಿದ CSK 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ೨೭ ರನ್‌ಗಳಿಂದ ಗೆಲುವು ಸಾಧಿಸಿದ ಆರ್‌ಸಿಬಿ ರನ್‌ರೇಟ್‌ ಆಧಾರದ ಮೇಲೆ ಪ್ಲೇ ಆಫ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿತು.    

ಧೋನಿ ಸಿಕ್ಸರ್‌ನಿಂದ ಆರ್‌ಸಿಬಿಗೆ ಗೆಲುವು!  

ರೋಚಕ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಯಶ್‌ ದಯಾಳ್‌ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಧೋನಿ 110 ಮೀಟರ್ ಸಿಕ್ಸರ್ ಬಾರಿಸಿದರು. ಈ ವೇಳೆ ಚೆಂಡು ಕ್ರೀಡಾಂಗಣದ ಹೊರಗೆ ಬಿದ್ದಿತು. ಇದರಿಂದ ನಮಗೆ ಹೊಸ ಚೆಂಡು ಸಿಕ್ಕಿತು. ಹೀಗಾಗಿ ನಮಗೆ ಗೆಲುವು ಸುಲಭವಾಯಿತು ಎಂದು ಕಾರ್ತಿಕ್‌ ಹೇಳಿದ್ದಾರೆ.  

ಇದನ್ನೂ ಓದಿ: Rohith Sharma: ಮುಂದಿನ ವರ್ಷ ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್‌ ಶರ್ಮಾ ಗುಡ್‌ಬೈ: ಕೊಚ್‌ ಹೇಳಿದ್ದೇನು ಗೊತ್ತೇ??

ಈ ಓವರ್‌ನ 2ನೇ ಎಸೆತದಲ್ಲಿ ಧೋನಿ ಔಟಾದರು. ನಂತರ ಬಂದ ಶಾರ್ದೂಲ್‌ ಠಾಕೂರ್‌ ಒಂದು ಡಾಟ್‌ & ಸಿಂಗಲ್‌ ರನ್‌ ತೆಗೆದುಕೊಂಡರು. 5 ಮತ್ತು 6ನೇ ಎಸೆತದಲ್ಲಿ ಜಡೇಜಾ ಸಿಕ್ಸರ್‌ ಬಾರಿಸುತ್ತಾರೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯಶ್‌ ದಯಾಳ್‌ ಅದ್ಭುತವಾಗಿ ಬೌಲಿಂಗ್‌ ಮಾಡುವ ಮೂಲಕ ಎರಡೂ ಬಾಲ್‌ಗಳನ್ನು ಡಾಟ್‌ ಮಾಡಿದರು. ಮೊದಲ 8 ಪಂದ್ಯಗಳಲ್ಲಿ ಕೇವಲ 1 ಗೆಲುವಿನ ಹೊರತಾಗಿಯೂ, ತಮ್ಮ ತಂಡವು ಸತತ 6 ಗೆಲುವಿನೊಂದಿಗೆ ಪ್ಲೇಆಫ್ ತಲುಪಲು ಕಠಿಣ ಹೋರಾಟ ನಡೆಸಿತು ಎಂದು ದಿನೇಶ್‌ ಕಾರ್ತಿಕ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News