ರಾಷ್ಟ್ರದ ಭದ್ರತೆ ಪ್ರಶ್ನೆ ಬಂದಾಗ ಏಕತೆಯ ಪ್ರದರ್ಶನ ಮಾಡಬೇಕು. ದೇಶದ ಗಡಿಯಲ್ಲಿ ಯೋಧರು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದಾರೆ. ಟೆರರಿಸ್ಟ್ ಆದಾಗ ಬಹಳ ಅನುಕಂಪದಿಂದ ಮಾತಾಡಬಾರದು. ಬಾಂಬ್ ಬ್ಲಾಸ್ಟ್ ಆದಾಗ ಪಕ್ಷತೀತವಾಗಿ ಒಟ್ಟಾಗಿ ನಿಲ್ಲಬೇಕು. ಅವನ್ಯಾವನೋ ಟೆರರಿಸ್ಟ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ? ಎಂದು ಪ್ರಶ್ನಿಸಿದರು.
ಜನಾರ್ದನ್ ರೆಡ್ಡಿ ನಮ್ಮ ಪಾರ್ಟಿಯವರೇ.. ರೆಡ್ಡಿ ವಿಚಾರ ಎಲ್ಲವನ್ನೂ ಹಿರಿಯರ ಗಮನಕ್ಕೆ ತಂದಿದ್ದಾರೆ ಎಂದು ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ವಿಚಾರ ಸಚಿವ ಆರ್. ಅಶೋಕ್ ಸ್ಪಷ್ಟೀಕರಣ ನೀಡಿದ್ದಾರೆ.
DK Shivakumar challenges BJP: ಸದಾಶಿವನಗರ ನಿವಾಸದ ಬಳಿ ಮಾತಾನಾಡಿದ ಅವರು, “ಸೋಲಿನ ಭೀತಿ ಅವರಿಗಿದೆ. ಜಿಲ್ಲಾ ಪಂಚಾಯತ್, ತಾ.ಪಂ ಎಲೆಕ್ಷನ್ ಮಾಡಲಿ. ಜನ ಏನು ಹೇಳ್ತಾರೆ ಎಂದು ನೋಡೋಣ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರು ತೆಗೆಯಲು ಆಗಲ್ಲ. ಕೆಲವರು ಪ್ರಧಾನ ಮಂತ್ರಿ ಹೋದ್ರೆ ದೇಶಾನೇ ಬದಲಾವಣೆ ಆಗುತ್ತೆ ಎಂದು ಹೇಳ್ತಾರೆ.
ಮುಸ್ಲಿಂ ಮತದಾರರ ಓಲೈಕೆಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿದ್ರಾಮುಲ್ಲಾ ಖಾನ್ ಆಗಿದ್ದಾರೆ ಎಂದು ಕಾಲೆಳೆಯುತ್ತಿದ್ದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಟಾಂಗ್ ನೀಡಿದೆ. ಬಿಜೆಪಿ ವರಿಷ್ಠ ನಿತಿನ್ ಗಡ್ಕರಿ ಹಾಗೂ ರಾಜ್ಯ ನಾಯಕರು ಮುಸ್ಲಿಂ ಟೋಪಿ ಹಾಕಿಕೊಳ್ಳುವ ಫೋಟೋ ಟ್ವೀಟರ್ನಲ್ಲಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ಗಡ್ಕರಿಯವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ ಎಂದು ಹಾಗೂ ಜಗದೀಶ್ ಶೆಟ್ಟರ್ ಹಾಗೂ ಆರ್ ಅಶೋಕ್ಗೆ "ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ ಅಂತ ವ್ಯಂಗ್ಯವಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಂಗವಾಗಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ರಾತ್ರಿ ಕಳೆದರು. ಹಾಸ್ಟೆಲ್ನಲ್ಲಿಯೇ ಸಾಮಾನ್ಯರಂತೆ ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಆರ್ ಅಶೋಕ್ ಮಲಗಿದ್ದರು. ಇಂದು ಬೆಳಿಗ್ಗೆ ವಾಕಿಂಗ್ ಮಾಡಿ ನಂತರ ವಿದ್ಯಾರ್ಥಿಗಳು ಕರಾಟೆ ತರಬೇತಿ ಪಡೆಯುವುದನ್ನು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಈ ವಿಚಾರವಾಗಿ ಕಮೀಷನರ್ ಜೊತೆ ಮಾತನಾಡಿದ್ದೇನೆ ಸಿಎಂ ಕೂಡ ಕಮೀಷನರ್ ಜೊತೆ ಮಾತಾಡಿದ್ದಾರೆ ಬೆಂಗಳೂರಿಗೆ ಆರು ಸಾವಿರ ಕೋಟಿ ಕೊಟ್ಟಿದ್ದಾರೆ ಆದ್ರೆ ನಿರಂತರ ಮಳೆಯಿಂದ ಕೆಲಸ ಮಾಡಲು ಆಗ್ತಿಲ್ಲ
ಲಿಂಗಾಯತರು, ಒಕ್ಕಲಿಗರು, ಈಡಿಗರು ಎಲ್ಲರೂ ಮೀಸಲಾತಿ ಹೆಚ್ಚಳಕ್ಕೆ ಮನವಿ ಕೊಟ್ಟಿದ್ದಾರೆ. ಖಂಡಿತ ಕಾನೂನು ಪ್ರಕಾರ ಪರಿಶೀಲನೆ ಮಾಡಿ ಮುಂದಡಿ ಇಡುತ್ತೇವೆ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಸರ್ಕಾರ, ಬಿಜೆಪಿ ಸರ್ಕಾರ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಭಾರತ ನೆಲದ ಬಗ್ಗೆ ಕೀಳು ಹೇಳಿಕೆ ನೀಡಿದವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದಾರೆ. ಇಂಥವರಿಂದ ಈ ನೆಲಕ್ಕೇ ಅಪಚಾರವಾಗುತ್ತಿದೆ. ಇಂಥ ಯಾತ್ರೆಗೆ ಜನ ಬೆಲೆ ನೀಡುವುದಿಲ್ಲ ಎಂದು ಭಾರತ್ ಜೋಡೋ ಯಾತ್ರೆ ವಿರುದ್ಧ ಸಚಿವ ಆರ್, ಆಶೋಕ್ ಹರಿಹಾಯ್ದರು.
ರಾಜ್ಯದ ಕಂದಾಯ ಇಲಾಖೆಗಳಲ್ಲಿ ವಿವಿಧ ಕೆಲಸಕ್ಕಾಗಿ ಓಡಾಡುವ ಜನಸಾಮಾನ್ಯರಿಗೆ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಇದರ ಬಗ್ಗೆ ಸರ್ಕಾರದ ಕ್ರಮ ಏನು ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಸಲೀಂ ಅಹ್ಮದ್ ವಿಧಾನ ಪರಿಷತ್ ನಲ್ಲಿ ಪ್ರಶ್ನಿಸಿದರು.
ಕಂದಾಯ ಸಚಿವ ಆರ್.ಅಶೋಕ್ ನೋಡಲೇಬೇಕಾದ ಸ್ಟೋರಿ ಇದು. ಸತ್ತವರ ಹೆಸರಿನ ಮೇಲೆ ಅಧಿಕಾರಿಗಳ ಗೋಲ್ಮಾಲ್ ಆಟ. ಯಾರದೋ ಜಮೀನು ಇನ್ಯಾರದ್ದೋ ಹೆಸರಿಗೆ ವರ್ಗಾವಣೆ. ಇದು ಮೃತ ಮಹಿಳೆ ಬಂದು ಜಮೀನು ಮಾರಿದ ಕಥೆ.
ಚುನಾವಣೆ ಬಂದಾಗ ನಾನು ಬೆಂಗಳೂರಿನಿಂದ ಹೊರಗೆ ಸ್ಫರ್ಧಿಸಲು ಸಿದ್ಧ. ಸದ್ಯ ಅಶೋಕ್ ಇದ್ದಾರೆ, ಅವರಿಗೇ ಬೆಂಗಳೂರು ಜವಾಬ್ದಾರಿ ಕೊಡಿ. BBMP ಚುನಾವಣಾ ಸಿದ್ಧತಾ ಸಭೆಯಲ್ಲಿ ಸಚಿವ ಸೋಮಣ್ಣ ಅಚ್ಚರಿ ಹೇಳಿಕೆ.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ. ಈ ಪ್ರಕರಣ ಖಂಡಿಸಿ 26ಕ್ಕೆ ಕೊಡಗು ಚಲೋ ಮಾಡ್ತೀವಿ. ಮುತ್ತಿಗೆ ವೇಳೆ ನಮಗೆ ಯಾರು ಟಚ್ ಮಾಡ್ತಾರೆ ನೋಡೋಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.